ಈ ಕನ್ನಡ ನೆಲದಿ ಜನಿಸಿ

ಈ ಕನ್ನಡ ನೆಲದಿ ಜನಿಸಿ
ನಾನಾದೆನು ನಿಜದಿ ಧನ್ಯ|
ಈ ಕೃಷ್ಣಕಾವೇರಿ ನದಿಯಲಿ ಮಿಂದು
ನನಗಾಯಿತು ಮಹಾಪುಣ್ಯ|
ಕನ್ನಡ ಹಾಡಾಯಿತು
ನನಗದುವೆ ದಿವ್ಯಮಂತ್ರ
ಈ ಕನ್ನಡ ಬಾವುಟ ಹಿಡಿದ
ನನ್ನ ಕೈಯಾಯಿತು ಚಿನ್ನ||

ಇಲ್ಲಿರುವ ಪ್ರಕೃತಿಸೌಂದರ್ಯ್ಯ
ಇಲ್ಲಿ ಬೆಳೆಯುವ ಶ್ರೀಗಂಧವ
ಇನ್ನೆಲ್ಲಿ ಕಾಣಸಿಗಲಿ ನಾ|
ಇಲ್ಲರಿಯುವ ನದಿನೀರ ಸಿಹಿಯ
ಇನ್ನೆಲ್ಲಿ ಸವಿಯಲಿ ನಾ|
ಇಲ್ಲಿರುವ ಜನರ ಸರಳತೆ ಮುಗ್ಧತೆಯ
ಇನ್ನೆಲ್ಲಿ ನೋಡಬಯಸಲಿ ನಾ||

ಇಲ್ಲಿರುವ ಉಡುಪಿ ವೈಕುಂಠ ದ್ವಾರವ
ಗೋಕರ್ಣ ಭೂಕೈಲಾಸ ಲಿಂಗವ
ಇನ್ನೆಲ್ಲಿ ಸ್ಪರ್ಶಿಸಲಿ ನಾ|
ಇಲ್ಲಿ ನೆಲೆಸಿರುವ ನವದುರ್ಗೆಯರ ಶಕ್ತಿಯ
ಇನ್ನೆಲ್ಲಿ ದರ್ಶಿಸಲಿ ನಾ|
ಹಾವು ಕಪ್ಪೆಗೆ ಆಶ್ರಯ ನೀಡಿ
ರಕ್ಷಣೆ ಮಾಡಿರುವ ಶೃಂಗೇರಿ
ಶಾರದಾ ಸನ್ನಿಧಿಯ ಇನ್ನೆಲ್ಲಿ ಕಾಣಲಿ ನಾ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಕ್ಕರೆ ಕಾಯಿಲೆಗೆ ಸಿದ್ದೌಷಧಿ
Next post ಕನಸಿನ ಕೋಣೆ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

cheap jordans|wholesale air max|wholesale jordans|wholesale jewelry|wholesale jerseys